ಹರಿಯುವ ನೀರಿನ ತರ ಈ ಬಾಳು

ಹರಿಯುವ ನೀರಿನ ತರ ಈ ಬಾಳು
ಸರಿದು ಹೋಯಿತೇ!
ನಾರಿಯಾಗಿ ನಾ ಪಡೆದದ್ದೆಲ್ಲಾ
ವ್ಯರ್ಥವಾಯಿತೇ!
ಒಂದೆ ಗಳಿಗೆ ಕಣ್ಣೀರ ತೇವಕೆ
ಹಮ್ಮು ಆರಿತೇ,
ನೋವಿನ ದನಿ ವಸಂತನ ಮುಖದ
ಗೆಲುವ ಅಳಿಸಿತೇ!

ಕಂಬನಿ ಸೂಸುವ ಇಂಥ ಚೈತ್ರನ
ಕಾಣಲಿಲ್ಲ ಎಂದೂ
ಅಗಲಿದ ವ್ಯಥೆಗೆ ಬಣ್ಣ ಬಲಿದಿದೆ
ಕೆಂಪು ಚಿಗುರು ಬಂದು

ಉರಿವೈಶಾಖದ ಹಾಗೆ ಹಿಂದೆ
ಸುಡುತಲಿತ್ತು ಬಾಳು
ಆಷಾಢದ ಆಗಮನದ ಸನ್ನೆಗೆ
ಆರಿಹೋಯ್ತು ಗೋಳು

ಮನದ ಬಾಗಿಲಲಿ ಮಲ್ಲಿಗೆ ಬಳ್ಳಿ
ನಕ್ಕಿತು ಹಸಿರಲೆ ತಾಳಿ
ಹಗಲು ಇರುಳೂ ರೆಪ್ಪೆ ಬಡಿಯದೆ
ಕಾದಿಹೆ ಯಾರದೊ ದಾರಿ

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ-೧೫೬
Next post ಭೂಕಂಪನಕ್ಕೆ ಮುನ್ನೆಚ್ಚರಿಕೆ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys